ಸೋಮವಾರಪೇಟೆ: ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಜಲ ಪ್ರಳಯದಿಂದ ಸಂತ್ರಸ್ತರಾದ 13 ಕುಟುಂಬಗಳಿಗೆ ವೀರಶೈವ ತತ್ವ ಪ್ರಚಾರ ಸಂಘ, ವಿವಿಧ ರೀತಿಯ ನೆರವು ನೀಡಲು ಮುಂದಾಗಿದೆ.
ಕಳೆದ ಆಗಸ್ಟ್ನಲ್ಲಿ ನಡೆದ ಜಲಪ್ರಳಯದಿಂದ ಕಂಗೆಟ್ಟಿರುವ ಮೇಘತ್ತಾಳು ಗ್ರಾಮದ ಕುಟುಂಬಗಳ ಸ್ಥಿತಿ, ಗತಿಗಳನ್ನು ಪರಿಶೀಲಿಸಿದ ಬೆಂಗಳೂರಿನ ವೀರಶೈವ ತತ್ವ ಪ್ರಚಾರ ಸಂಘದ ಪದಾಧಿಕಾರಿಗಳು ಕೊಡ್ಲಿಪೇಟೆಯ ಕಲ್ಲು ಮಠದ ಆವರಣದಲ್ಲಿ ನೆರವು ನೀಡಿದರು.
13 ಕುಟುಂಬಗಳ ಕೃಷಿ ಸಾಲವನ್ನು ಹೊರತುಪಡಿಸಿ ಚಿನ್ನಾಭರಣ ಸೇರಿದಂತೆ ಇತರೆ ಸಾಲಗಳ ಮೇಲಿನ ಸಂಪೂರ್ಣ ಬಡ್ಡಿಯನ್ನು ಸಂಘವೇ ಭರಿಸಲಿದೆ. ಈ ಕುಟುಂಬಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ, ಕಾಲೇಜು ಶುಲ್ಕ ಮತ್ತಿತರೆ ಖರ್ಚುಗಳನ್ನು ಪಾವತಿಸಲು ಕ್ರಮವಹಿಸಲಾಗುವದು. ಮುಂದಿನ ದಿನಗಳಲ್ಲಿ ಈ ಕುಟುಂಬಗಳಿಗೆ ನಿವೇಶನಗಳಿದ್ದಲ್ಲಿ ಮನೆ ನಿರ್ಮಿಸಿ ಕೊಡಲಾಗುವದು ಎಂದು ಸಂಸ್ಥೆಯ ಪ್ರಮುಖರು ತಿಳಿಸಿದರು.
ಈ ಸಂದರ್ಭ ಕಲ್ಲುಮಠದ ಮಠಾಧೀಶರಾದ ಶ್ರೀ ಮಹಾಂತ ಸ್ವಾಮೀಜಿ, ವೀರಶೈವ ತತ್ವ ಪ್ರಚಾರ ಸಮಿತಿ ನಿರ್ದೇಶಕರು ಹಾಗೂ ಬೆಂಗಳೂರು ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಎಂ. ಶಿವಕುಮಾರ್ ಮತ್ತು ಸಂಸ್ಥೆ ನಿರ್ದೇಶಕರು ಹಾಗು ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಹೆಚ್.ಎನ್. ವೀರೇಶ್, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಎಂ. ಮಲ್ಲಯ್ಯ ಸದಸ್ಯರಾದ ಶ್ಯಾಮ ಸುಂದರ್, ವೀರಶೈವ ಲಿಂಗಾಯತ ಕಲ್ಯಾಣ ಸಂಸ್ಥೆಯ ಬಿ.ವಿ. ಸತೀಶ್, ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾಂತರಾಜು ಪ್ರಮುಖರಾದ ಸಿ.ವಿ. ವಿನಾಯಕ, ರಾಜೇಶ್ವರಿ ನಾಗರಾಜ್, ಮಮತಾ ಸತೀಶ್, ದಿವಾಕರ ಮತ್ತಿತರರು ಉಪಸ್ಥಿತರಿದ್ದರು.