ಸೋಮವಾರಪೇಟೆ, ಡಿ. 25: ಮೂಲ ನಿವಾಸಿಗಳ ಅಭಿವೃದ್ಧಿ ಯೋಜನೆಯಡಿ, ತಾಲೂಕು ಮಟ್ಟದ ಜೇನು ಕುರುಬ ಜನಾಂಗದ ಸಾಂಸ್ಕøತಿಕ ಸಮ್ಮೇಳನ ವನ್ನು ಜ. 22 ರಂದು ಕುಶಾಲನಗರದ ರೈತ ಭವನದಲ್ಲಿ ಆಚರಿಸಲು ತೀರ್ಮಾನಿ ಸಲಾಯಿತು. ತಹಶೀಲ್ದಾರ್ ಪಿ.ಎಸ್. ಮಹೇಶ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆದಿವಾಸಿಗಳ ಮುಖಂಡರೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲಾಯಿತು. ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಲು ಗಿರಿಜನರ ಹಾಡಿಯ ಪ್ರಮುಖರು ಸಹಕಾರ ನೀಡಬೇಕೆಂದು ತಹಶೀಲ್ದಾರ್ ಮನವಿ ಮಾಡಿದರು. ಹಾಡಿಯಿಂದ ಗಿರಿಜನರನ್ನು ಕರೆದುಕೊಂಡು ಹೋಗಿ, ವಾಪಾಸ್ಸು ಹಾಡಿಗೆ ತಲಪಿಸಲು ಉಚಿತವಾಗಿ ವಾಹನ ಸೌಲಭ್ಯವನ್ನು ಒದಗಿಸ ಲಾಗುವದು. ಪ್ರತಿ ಕಲಾ ತಂಡಗಳಿಗೆ ಗೌರವಧನ ನೀಡಲಾಗುವದು. ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸ ಲಾಗುವದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್ ಹೇಳಿದರು. ಸಭೆಯಲ್ಲಿ ಹಾಜರಿದ್ದ ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ರಾಜಾರಾವ್ ಮಾತನಾಡಿ, ಜೇನುಕುರುಬ ಜನಾಂಗದವರ ಕಲಾ ಪ್ರದರ್ಶನಕ್ಕೆ ಇದೊಂದು ವೇದಿಕೆಯಾಗಿದ್ದು, ಗಿರಿಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಸಮ್ಮೇಳನ ಯಶಸ್ಸಿಗೆ ಎಲ್ಲರೂ ಶ್ರಮಿಸುವದಾಗಿ ತಿಳಿಸಿದರು.
ಗಿರಿಜನರ ಮುಖಂಡರಾದ ಪ್ರಕಾಶ್, ರಮೇಶ್, ಸುಬ್ರಮಣಿ, ಚಂದ್ರು, ಸ್ವಾಮಿ, ಸೋಮಕ್ಕ, ಧರ್ಮ, ವಿಶಾಲಾಕ್ಷಿ, ಸೀತೆ ಮತ್ತು ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.