ಕುಶಾಲನಗರ, ಡಿ. 19: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಗ್ರಾಹಕರ ಸೋಗಿನಲ್ಲಿ ಅಂಗಡಿಯೊಂದರಿಂದ ಚಪ್ಪಲಿ ಸೇರಿದಂತೆ ಕಾಣಿಕೆ ಡಬ್ಬ ಅಪಹರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬುಧವಾರ ಈ ಘಟನೆ ನಡೆದಿದ್ದು ರಥಬೀದಿಯ ಗಲ್ಲಿಯೊಂದರ ಚಪ್ಪಲಿ ಅಂಗಡಿಗೆ ಆಗಮಿಸಿದ ಗ್ರಾಹಕರು ಮಾಲೀಕರ ಕಣ್ತಪ್ಪಿಸಿ ಅಂಗಡಿಯಿಂದ ಒಂದು ಜೊತೆ ಚಪ್ಪಲ್ ಮತ್ತು ಕೌಂಟರ್ನಲ್ಲಿ ಇರಿಸಲಾಗಿದ್ದ ದೇವರ ಕಾಣಿಕೆ ಡಬ್ಬ ಸಹಿತ ಪರಾರಿಯಾಗಿರುವದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಈ ಸಂಬಂಧ ಅಂಗಡಿ ಮಾಲೀಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.