ಮಡಿಕೇರಿ, ಡಿ. 6: ಪ್ರಾಕೃತಿಕ ವಿಕೋಪ ಹಾನಿಯ ಕಾರಣ ಮುಂದೊಡ್ಡಿ; ಕರ್ನಾಟಕ ಸರಕಾರವು ಕೊಡಗು ಜಿಲ್ಲೆಗೆ ಸೀಮಿತಗೊಳಿಸಿ ಕೃಷಿಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತಿಸುವದನ್ನು ಸ್ಥಗಿತಗೊಳಿಸಿದೆ.ಈ ಸಂಬಂಧ ರಾಜ್ಯ ಸರಕಾರ ಕೈಗೊಂಡಿರುವ ತೀರ್ಮಾನದ ಕುರಿತು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಮಲಮ್ಮ ಅವರು, ಕಳೆದ ನವೆಂಬರ್ 23ರಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ.

ಈಚೆಗೆ ಕೊಡಗಿನಲ್ಲಿ ಮಳೆಯ ತೀವ್ರತೆ ಹಾಗೂ ಮಾನವ ನಿರ್ಮಿತ ಹಾನಿಯ ಕಾರಣಗಳಿಂದ ಎದುರಾ ಗಿರುವ ಭೂಕುಸಿತ ಇತ್ಯಾದಿಯ ಪರಿಣಾಮಗಳನ್ನು ಮನಗಂಡು ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಪರಿವರ್ತಿಸುವದನ್ನು ಸ್ಥಗಿತಗೊಳಿಸಲು ಸರಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆದೇಶದಲ್ಲಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಕೆಳಗಿನ ವರದಿಯನ್ನು ಉಲ್ಲೇಖಿಸ ಲಾಗಿದೆ.

‘‘ಆಗಸ್ಟ್ ತಿಂಗಳ ಭೂಕುಸಿತಕ್ಕೆ ಸಾಕಷ್ಟು ಕಾರಣಗಳಿದ್ದರೂ, ಪ್ರಮುಖವಾಗಿ ಮಳೆ ಹಾಗೂ ಮಾನವ ಕೃತ್ಯ ಕಾರಣವಾಗಿದೆ. ಕೊಡಗಿನಲ್ಲಿ ಭೂ ಬಳಕೆಗೆ ಸರಿಯಾದ ನೀತಿ ಜಾರಿ ಯಾಗಲೀ, ನಿಯಮಗಳಾಗಲೀ ಇರುವದಿಲ್ಲ. ಸರಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆಗೂಡಿ ಪಶ್ಚಿಮಘಟ್ಟ ಹಾಗೂ ವಿಶೇಷವಾಗಿ ಕೊಡಗಿನಲ್ಲಿ ಭೂ ಬಳಕೆ ಬಗ್ಗೆ ಸರಿಯಾದ ನೀತಿ ರೂಪಿಸಬೇಕು. ಭೂಕುಸಿತ ಹಾಗೂ ಬಫರ್ ಜೋನ್‍ಗಳಲ್ಲಿ ಯಾವ ರೀತಿಯ ಚಟುವಟಿಕೆಗಳನ್ನು ಮಾಡ ಬಹುದು ಎಂಬ ಬಗ್ಗೆ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು’’