ಪೊನ್ನಂಪೇಟೆ, ನ. 24: ಪೊನ್ನಂಪೇಟೆಯ ನಾಗರಿಕ ವೇದಿಕೆಯ ವತಿಯಿಂದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ರೂ. 1.90 ಲಕ್ಷದಷ್ಟು ನೆರವನ್ನು ಹಸ್ತಾಂತರಿಸಲಾಯಿತು.
ವೇದಿಕೆಯ ಪದಾಧಿಕಾರಿಗಳಾದ ಪಿ.ಬಿ. ಪೂಣಚ್ಚ, ಕಟ್ಟೇರ ಲಾಲಪ್ಪ, ಮಲ್ಲಂಗಡ ಬೋಸು ಕುಂಞಪ್ಪ, ತೀತಿರ ಜಯ ಅಯ್ಯಪ್ಪ, ಗುಡಿಯಂಗಡ ನಾಚಪ್ಪ, ಅಲ್ಲಮಾಡ ಶಶಿ, ಮುಕುಂದ, ಪಿ.ಕೆ. ಗಿರೀಶ್, ಎಂ.ಎಸ್. ಬಿದ್ದಪ್ಪ ಅವರುಗಳು ಇತ್ತೀಚೆಗೆ ಮಕ್ಕಂದೂರು ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಪಂಡ ರವಿಕಾಳಪ್ಪ ಅವರ ಉಸ್ತುವಾರಿಯಲ್ಲಿ ಸಹಾಯಧನ ಹಸ್ತಾಂತರಿಸಿದರು.