ಶ್ರೀಮಂಗಲ, ನ. 5: ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗಿನ ನೆರವಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂದಾಯವಾಗಿರುವ ಹಣ ಹಾಗೂ ಹಲವು ದೃಶ್ಯ ಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಕೊಡಗಿನ ದುರಂತಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಜನರಿಂದ ಹಣ ಸಂಗ್ರಹಿಸಿದ್ದು, ಇದನ್ನು ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ದುರಂತದ ಫಲಾನುಭವಿಗಳಿಗೆ ನೀಡುವಂತಾಗ ಬೇಕೆಂದು ಕೊಡಗು ಮಾರಕ ಯೋಜನೆಗಳ ವಿರೋಧಿ ವೇದಿಕೆ ಒತ್ತಾಯಿಸಿದೆ.

ಪೊನ್ನಂಪೇಟೆಯಲ್ಲಿ ವೇದಿಕೆಯ ಶ್ರೀಮಂಗಲ, ನ. 5: ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗಿನ ನೆರವಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂದಾಯವಾಗಿರುವ ಹಣ ಹಾಗೂ ಹಲವು ದೃಶ್ಯ ಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಕೊಡಗಿನ ದುರಂತಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಜನರಿಂದ ಹಣ ಸಂಗ್ರಹಿಸಿದ್ದು, ಇದನ್ನು ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ದುರಂತದ ಫಲಾನುಭವಿಗಳಿಗೆ ನೀಡುವಂತಾಗ ಬೇಕೆಂದು ಕೊಡಗು ಮಾರಕ ಯೋಜನೆಗಳ ವಿರೋಧಿ ವೇದಿಕೆ ಒತ್ತಾಯಿಸಿದೆ.

ಪೊನ್ನಂಪೇಟೆಯಲ್ಲಿ ವೇದಿಕೆಯ ಜನರು ಹಣ ನೀಡಿದ್ದಾರೆ. ಹೀಗೆ ಸಂಗ್ರಹವಾದ ಎಲ್ಲಾ ಹಣವನ್ನು ದುರಂತದ ಸಂತ್ರಸ್ತರಿಗೆ ಪುನರ್‍ವಸತಿ ಕಲ್ಪಿಸಲು ವಿನಿಯೋಗವಾಗಬೇಕು. ಕೊಡಗಿನ ದುರಂತದ ಹೆಸರಿನಲ್ಲಿ ಸಂಗ್ರಹವಾದ ಹಣ ಬೇರೆ ಯಾವದೆ ವ್ಯವಹಾರಕ್ಕೆ ವಿನಿಯೋಗಿಸಿ ಕೊಳ್ಳಬಾರದು. ಈ ನಿಟ್ಟಿನಲ್ಲಿ ಸಾರ್ವಜನಿಕರೆದುರು ಪಾರದರ್ಶಕ ವಾದ ವಿವರವನ್ನು ನೀಡುವಂತಾಗ ಬೇಕೆಂದು ಒತ್ತಾಯಿಸಲಾಯಿತು.

ದುರಂತಕ್ಕೀಡಾದ ಪ್ರದೇಶದ ಮಕ್ಕಳನ್ನು ಸೇನೆಗೆ ಭರ್ತಿ ಮಾಡಲು ಎಂ.ಇ.ಜಿ. ಕೊಡವ ಸಮಾಜ ದೊಂದಿಗೆ ವ್ಯವಹರಿಸಿ ಸೇನಾ ನೇಮಕಾತಿ ರ್ಯಾಲಿಯನ್ನು ಜಿಲ್ಲೆಯಲ್ಲಿ ನಡೆಸಲು ವ್ಯವಹರಿಸಲಾಗುತ್ತಿದೆ. ದುರಂತಕ್ಕೀಡಾದ ಜನರು ತಮ್ಮ ಗ್ರಾಮದಲ್ಲಿಯೆ ಮನೆ ನಿರ್ಮಿಸಿಕೊಳ್ಳಲು ಬಯಸಿದರೆ ಅಲ್ಲಿಯೆ ಸರ್ಕಾರ ಮನೆ ನಿರ್ಮಿಸಿ ಕೊಡುವಂತೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಯವರು ಸಹಮತ ವ್ಯಕ್ತಪಡಿಸಿದ್ದು, ತಮ್ಮ ಸ್ವಂತ ಗ್ರಾಮದಲ್ಲಿ ಸಂತ್ರಸ್ತರು ಬಯಸುವ ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಕೊಡಗಿನ ಮೂಲಕ ರೈಲ್ವೆ ಮಾರ್ಗ ಮತ್ತು ಮೈಸೂರು ಮಡಿಕೇರಿ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆಯಿಂದ ಜಿಲ್ಲೆಗೆ ದೊಡ್ಡ ಮಟ್ಟದ ಹಾನಿಯಾಗಲಿದ್ದು, ಈ ಯೋಜನೆಯನ್ನು ವಿರೋಧಿಸಲು ನಿರ್ಧರಿಸಲಾಯಿತು.

ಈ ಸಂದರ್ಭ ಸಭೆಯ ವೇದಿಕೆಯಲ್ಲಿ ಪ್ರಮುಖರಾದ ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ, ಜಮ್ಮಡ ಗಣೇಶ್ ಅಯ್ಯಣ್ಣ, ಬ್ರಿಗೇಡಿಯರ್ ಎಂ.ಎ. ದೇವಯ್ಯ, ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ, ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಯುಕೋ ಸಂಘಟನೆಯ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕರಾದ ಮಲ್ಲಮಾಡ ಪ್ರಭು ಪೂಣಚ್ಚ, ಮತ್ತು ಕೊಂಗಂಡ ಅಚ್ಚಯ್ಯ ಹಾಜರಿದ್ದರು.