ಸೋಮವಾರಪೇಟೆ, ಅ. 21: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ತಾ. 23ರಂದು ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಸಂಘದ ಗೌರವಾಧ್ಯಕ್ಷ ಬಿ.ಎ. ಜೀವಿಜಯ ತಿಳಿಸಿದ್ದಾರೆ.

ಅಂದು ಮಧ್ಯಾಹ್ನ 1.30ಕ್ಕೆ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಟಿ. ತಿಮ್ಮಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕಾಫಿ ಬೆಳೆಗಾರರಾದ ಜಿ.ಕೆ. ರುದ್ರಪ್ಪ, ಎ.ಪಿ ಶಂಕರಪ್ಪ, ಎ.ಆರ್. ಮುತ್ತಣ್ಣ, ಸಿ.ಕೆ. ರಾಘವ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಹಾಲೆಬೇಲೂರು ನಿರ್ವಾಣಿಶೆಟ್ಟಿ, ಎಚ್.ಆರ್. ದಾಮೋದÀರ್, ಎಚ್.ಎನ್. ತಂಗಮ್ಮ, ಎನ್.ಯು. ಚೋಂದಮ್ಮ, ಡಿ.ಎನ್. ಸದಾಶಿವಪ್ಪ ಹಾಗೂ ಶಾಲೆಯ ಪದವೀಧರ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮರವರನ್ನು ಸನ್ಮಾನಿಸಲಾಗುವದು.

ಶಾಲೆಯ ಹಳೆಯ ವಿದ್ಯಾರ್ಥಿಗಳು ಬೆಳಿಗ್ಗೆ 10.30ಕ್ಕೆ ಶತಮಾನೋತ್ಸವ ಭವನದಲ್ಲಿ ಶ್ರಮದಾನ ನಡೆಸಲಿದ್ದು, ಶಾಲೆಯಲ್ಲಿ ಅಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜೀವಿಜಯ ತಿಳಿಸಿದ್ದಾರೆ.