ವೀರಾಜಪೇಟೆ, ಸೆ.25: ಜಿಲ್ಲೆಯಲ್ಲಿ ಉಂಟಾದ ಭೀಕರ ಅತಿವೃಷ್ಟಿಯಿಂದಾಗಿ ಇಲ್ಲಿನ ಗೌಡ ಸಮಾಜದ ವತಿಯಿಂದ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಕೈಲ್‍ಮೂಹೂರ್ತ ಸಂತೋಷ ಕೂಟವನ್ನು ಈ ಬಾರಿ ಆಚರಿಸಲಾಗುವದಿಲ್ಲ ಎಂದು ಸಂಘದ ಅಧ್ಯಕ್ಷ ಮೂಡಗದ್ದೆ ರಾಮಕೃಷ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಅನೇಕರು ಪ್ರಕೃತಿ ವಿಕೋಪದಿಂದ ತಮ್ಮ ಮನೆ ಮಠ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಸಂದರ್ಭ ನಾವುಗಳು ಸಂತೋಷ ಕೂಟಗಳನ್ನು ಆಚರಿಸಿ ಸುಖ ಪಡುವದರಲ್ಲಿ ಯಾವದೇ ಅರ್ಥವಿಲ್ಲ. ಸಂತೋಷ ಕೂಟಕ್ಕೆ ಬಳಸುವ ಪೂರ್ತಿ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವದಾಗಿ ತಿಳಿಸಿದರಲ್ಲದೆ ಸಂತ್ರಸ್ತ ಕುಟುಂಬಕ್ಕೆ ಗೌಡ ಸಮಾಜದಿಂದ ಸಾಂತ್ವನ ಹೇಳಿರುವದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಚಂಡಿರ ಸುಂದರ ಉಪಸ್ಥಿತರಿದ್ದರು.