ಮಡಿಕೇರಿ, ಸೆ. 24: ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಸಂಪಾಜೆ ಗ್ರಾಮದ ಕೊಯನಾಡಿನ ನೆರೆಸಂತ್ರಸ್ತ ಅಂಗವಿಕಲೆ, ಅಶಕ್ತ ಮಹಿಳೆ ಆಯೇಷಾ ಅವರ ಬಾವಿ ಸಂಪೂರ್ಣವಾಗಿ ಕೆಸರು, ಮರಳಿನಿಂದ ಮುಚ್ಚಿ ಹೋಗಿತ್ತು.

ಸಂಪಾಜೆಯ ಶ್ರೀಭಗವಾನ್ ಸಂಘದ ಸ್ವಯಂ ಸೇವಕರು ಎನ್.ಸಿ. ಅನಂತ್ ಅವರ ನೇತೃತ್ವದಲ್ಲಿ ಬಾವಿಯನ್ನು ದುರಸ್ತಿಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡು ಬಡ ಕುಟುಂಬಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.