ಗೋಣಿಕೊಪ್ಪ ವರದಿ, ಸೆ. 24: : ದೇವಿ ಚಾಮುಂಡೇಶ್ವರಿ ಪೂಜೆ ಯೊಂದಿಗೆ ಸಾಂಪ್ರದಾಯಿಕವಾಗಿ ಗೋಣಿಕೊಪ್ಪ ದಸರಾ ಆಚರಿಸುವ ನಿರ್ಧಾರವನ್ನು ಕಾವೇರಿ ದಸರಾ ಸಮಿತಿಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು.ಗ್ರಾಮ ಪಂಚಾಯಿತಿ ಹಳೆಯ ಕಟ್ಟಡ ಸಭಾಂಗಣದಲ್ಲಿ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾವೇರಿ ದಸರಾ ಸಮಿತಿಯ ಮಹಾಸಭೆಯಲ್ಲಿ ಕೊಡಗಿನಲ್ಲಿ ಉಂಟಾದ ಭೂಕುಸಿತ ದಿಂದಾಗಿ ದಸರಾ ಹೇಗೆ ನಡೆಸ ಬೇಕೆಂಬ ಚರ್ಚೆ ನಡೆಸಲಾಯಿತು. ಸರ್ಕಾರ ನೀಡುವ ಅನುದಾನ ವನ್ನು ಬಳಸಿಕೊಂಡು ದಸರಾ ಆಚರಿಸುವಂತೆ ನಿರ್ಧರಿಸಲಾಯಿತು. ಚಾಮುಂಡೇಶ್ವರಿ ಪೂಜೆ ಸಾಂಪ್ರದಾಯಿಕವಾಗಿ ನಡೆಸಬೇಕಿದೆ. ಇದರಂತೆ ನಡೆಯಲಿದೆ. ಆದರೆ, ಜಿಲ್ಲೆಯಲ್ಲಿ ಸಾವು-ನೋವು ನಡೆದಿರುವದರಿಂದ ಸರ್ಕಾರದ ಅನುದಾನ ಘೋಷಣೆಯಾದ ನಂತರ ಪ್ರತ್ಯೇಕ ಸಭೆ ನಡೆಸಿ ತೀರ್ಮಾನಿ ಸುವಂತೆ ನಿರ್ಧರಿಸಲಾಯಿತು.ದಸರಾಕ್ಕೆ ಬರುವ ಅನುದಾನ ಒಂದಷ್ಟು ಭಾಗವನ್ನು ಜಿಲ್ಲೆಯ ಸಂತ್ರಸ್ತರ ನಿಧಿಗೆ ನೀಡುವಂತೆ ಸಲಹೆಗಳು ಬಂದವು. ಅನುದಾನ ಕಡಿಮೆ ಬಂದರೆ ಶೋಭಾಯಾತ್ರೆ ನಡೆಸುವದು
(ಮೊದಲ ಪುಟದಿಂದ) ಕೂಡ ಕಷ್ಟ. ಯಾರನ್ನೂ ಕೂಡ ಹಣ ಕೇಳಲು ಆಗುವದಿಲ್ಲ. ಈ ನಿಟ್ಟಿನಲ್ಲಿ ಕಡಿಮೆ ಹಣ ಬಂದರೆ ಶೋಭಾಯಾತ್ರೆಗೆ ಉಪ ಸಮಿತಿಗಳ ತೇರು ನಿರ್ಮಿಸಲು ಆರ್ಥಿಕ ಮುಗ್ಗಟ್ಟು ಎದುರಾಗಲಿದೆ. ಇದರಿಂದಾಗಿ ಶೀಘ್ರದಲ್ಲಿಯೇ ತೇರು ಅನಾವರಣ ಬೇಕೆ ಎಂಬ ಬಗ್ಗೆ ಸರ್ಕಾರದ ಅನುದಾನ ಘೋಷಣೆಯಾದಂತೆ ಸಭೆ ನಡೆಸಿ ನಿರ್ಧರಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಕಳೆದ ದಸರಾ ಆಚರಣೆಯಲ್ಲಿ ತೀರ್ಪುಗಾರರು ಎಲ್ಲಾ ಮಂಟಪಗಳನ್ನು ವೀಕ್ಷಿಸದೆ ತೀರ್ಪು ನೀಡಿದ ಬಗ್ಗೆ ಉಪಸಮಿತಿಗಳ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ಮುಂದೆ ನಡೆಯಬಾರದು. ಲಕ್ಷಾಂತರ ಖರ್ಚು ಮಾಡಿ ಅನಾವರಣಗೊಳಿಸದ ಮಂಟಪಗಳನ್ನು ವೀಕ್ಷಿಸದೆ ತೀರ್ಪು ನೀಡಿರುವದು ಸರಿಯಲ್ಲ ಎಂಬ ಮಾತುಗಳು ಕೇಳಿ ಬಂದವು.
ಕಳೆದ ಬಾರಿಯ ದಸರಾಕ್ಕೆ ಒಟ್ಟು 25,26 ಲಕ್ಷ ಖರ್ಚಾಗಿರುವ ಬಗ್ಗೆ ಲೆಕ್ಕ ಪತ್ರ ನೀಡಲಾಯಿತು. ಉಪ ಸಮಿತಿಗಳಿಗೆ ತೇರು ನಿರ್ಮಾಣಕ್ಕೆ ತಲಾ 50 ಸಾವಿರ ಹಾಗೂ ಬಹುಮಾನವನ್ನು ವಿತರಿಸಲಾಯಿತು. ಪ್ರ. ಕಾರ್ಯದರ್ಶಿ ಚೇಂದೀರ ಪ್ರಭಾವತಿ ಕಳೆದ ಬಾರಿಯ ವರದಿ ವಾಚಿಸಿದರು.
ಸಭೆಯಲ್ಲಿ ಕಾರ್ಯಧ್ಯಕ್ಷ ಬಿ. ಎನ್. ಪ್ರಕಾಶ್, ಖಜಾಂಜಿ ಧ್ಯಾನ್ ಸುಬ್ಬಯ್ಯ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಹಿರಿಯರುಗಳಾದ ಬಾಲಕೃಷ್ಣರೈ, ರಾಮಾಚಾರ್ ಉಪಸ್ಥಿತರಿದ್ದರು.
-ವರದಿ -ಸುದ್ದಿಪುತ್ರ