ಚೆಟ್ಟಳ್ಳಿ, ಸೆ. 23: ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಸದಸ್ಯರು ಮತ್ತು ಮಂಡ್ಯ ಜಿಲ್ಲಾ ರೈತ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಂಡದ ನೇತೃತ್ವದಲ್ಲಿ, ಮುನ್ನೂರು ಚೀಲದಷ್ಟು ಅಕ್ಕಿಯನ್ನು ಕುಂಬಾರಗಡಿಗೆ ಗ್ರಾಮದ ಸಂತ್ರಸ್ತರಿಗೆ ವಿತರಿಸಲಾಯಿತು.

ವಿತರಣೆ ಸಂದರ್ಭ ರೈತ ಸಂಘದ ಮುಖಂಡರಾದ ಸುಜಯ್ ಬೋಪಯ್ಯ, ಪುಚ್ಛಿಮಾಡ ಸುನಿಲ್ , ತೀತರಮಾಡ ಸುನಿಲ್ , ಕೊಂಗೇರಾ ಗಣಪತಿ ,ಮಂಡೇಪಂಡ ಬೋಪಯ್ಯ, ಮಂಡೇಪಂಡ ಅರ್ಜುನ್, ಪುತ್ತರಿರ ತಿಮ್ಮಯ್ಯ, ಮತ್ತಿತರರು ಉಪಸ್ಥಿತರಿದ್ದರು.