ಸುಂಟಿಕೊಪ್ಪ,ಸೆ.22: ವಾಹನವನ್ನು ಹಿಂದಿಕ್ಕುವ ರಭಸದಲ್ಲಿ ದ್ವಿಚಕ್ರ ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಉರುಳಿ ಬಿದ್ದು, ಆಗಮಿಸಿದ ಟಿಪ್ಪರ್ ಹರಿದ ಪರಿಣಾಮ ಬೈಕ್ ಸವಾರನ ಕಾಲು ಮುರಿದಿದೆ.ಸುಂಟಿಕೊಪ್ಪದಿಂದ ಕುಶಾಲನಗರ ಕಡೆÀಗೆ ತೆರಳುತ್ತಿದ್ದ ಸಂದರ್ಭ ಶಾಂತಗಿರಿ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ (ಕೆಎ12 ಆರ್0441) ಭೂತನಕಾಡು ಚೆಲವರಾಜ್ ಎಂಬವರ ಪುತ್ರ ವಿನೋದ್ (23) ವಾಹನವೊಂದನ್ನು ಹಿಂದಿಕಲು ಮುಂದಾದಾಗ ದ್ವಿಚಕ್ರ ವಾಹನವು ಸವಾರನ

(ಮೊದಲ ಪುಟದಿಂದ) ನಿಯಂತ್ರಣಕ್ಕೆ ಬಾರದೆ ಸವಾರ ವಿನೋದ್ ರಸ್ತೆಗೆ ಬಿದ್ದಿದ್ದಾನೆ. ಇದೇ ಸಂದರ್ಭ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದ ಟಿಪ್ಪರ್ ವಾಹನ (ಕೆಎ12ಬಿ3728) ಸವಾರ ವಿನೋದ್ ಅವರ ಎಡಕಾಲಿನ ಮೇಲೆ ಹರಿದ ಪರಿಣಾಮ ಕಾಲು ಮುರಿತಗೊಂಡಿದೆ. ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ.

ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಬೈಕ್ ಸವಾರನ ವಿರುದ್ಧ ಅಜಾಗರೂಕತೆ ಚಾಲನೆ ಹಾಗೂ ಟಿಪ್ಪರ್ ಚಾಲಕ ಸೋಮನಾಥ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.