ಕುಶಾಲನಗರ, ಸೆ 22: ಕುಶಾಲನಗರದ ಸಾಯಿ ಬಡಾವಣೆಯಲ್ಲಿರುವ ಶ್ರೀ ಸಾಯಿಬಾಬಾ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದ ಪೂರ್ವಭಾವಿ ಸಭೆ ತಾ. 23 ರಂದು (ಇಂದು) ನಡೆಯಲಿದೆ. ದೇವಾಲಯ ಆವರಣದಲ್ಲಿ ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಭಕ್ತರು, ಭಜನಾ ಮಂಡಳಿ, ಸಂಘಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಪ್ರತಿಷ್ಠಾಪನಾ ಮಹೋತ್ಸವದ ಕುರಿತು ಸಲಹೆ ಸೂಚನೆ ನೀಡಿ ಸಹಕರಿಸುವಂತೆ ದೇವಾಲಯ ಸಮಿತಿ ಕೋರಿದೆ.