ಮೂರ್ನಾಡು, ಸೆ. 22: ಇಲ್ಲಿನ ನವಚೇತನ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಹೆಚ್. ಸತೀಶ್ ಹಾಗೂ ಕಾರ್ಯದರ್ಶಿ ಆಗಿ ಎ.ಎನ್. ಪ್ರಶಾಂತ್ ಮರು ನೇಮಕಗೊಂಡಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಉಮೇಶ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಆಸೀಫ್, ಖಜಾಂಚಿ ಆಗಿ ವೇಣು ಗೋಪಾಲ್, ಸಹ ಕಾರ್ಯದರ್ಶಿ ಆಗಿ ಸಿ.ಜಿ. ಗಣೇಶ್ ಹಾಗೂ ನಿರ್ದೇಶಕರುಗಳಾಗಿ ಬೋಜ, ರಘು, ಶಿವಪ್ಪ, ವಸಂತ, ತೌಫಿಕ್, ಚಂದ್ರ, ಗಿಣಿ ಅವರುಗಳು ಆಯ್ಕೆಗೊಂಡಿದ್ದಾರೆ.