ಮಡಿಕೇರಿ, ಸೆ. 16: ಮಡಿಕೇರಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಸಮಾಜದ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ನಿರ್ವಹಿಸಿದ್ದು, ಮುಂದೆಯೂ ಸಮಾಜದ ಏಳಿಗೆಗಾಗಿ ಕೆಲಸ ಮುಂದುವರಿಸಲಿದೆ ಎಂದು ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ತಿಳಿಸಿದರು.ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಇಂದು ನಡೆದ ಸಮಾಜದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಕಾರ್ಯಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿದರು.ಈ ಸಮಿತಿ, ಅಧಿಕಾರ ವಹಿಸಿಕೊಂಡ ಸಮಯದಿಂದ ಸಮಾಜದ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸುತ್ತಿದೆ. ಕೊಡವ ಸಮಾಜದ ಕಟ್ಟಡ ನವೀಕರಣ ಸೇರಿದಂತೆ ಹಲವು ರೀತಿಯ ಕೆಲಸವನ್ನು ನಿರ್ವಹಿಸಿ ಕೊಂಡುಬಂದಿದೆ.

(ಮೊದಲ ಪುಟದಿಂದ) ಸಮಾಜ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಲವು ಕೆಲಸಗಳನ್ನು ಮುಂದೆಯೂ ನಿರ್ವಹಿಸಬೇಕಾಗಿದ್ದು, ಸಮಾಜ ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದೆ ಎಂದರು.

ಕೊಡಗಿನಲ್ಲಿ ಕಳೆದ ತಿಂಗಳು ನಡೆದ ಪ್ರಕೃತಿ ವಿಕೋಪದ ಬಗ್ಗೆ ವಿಷಾದ ವ್ಯಕ್ತ ಪಡಿಸಿದ ಅವರು, ವಿಕೋಪದ ಸಂದರ್ಭ ಕೊಡವ ಸಮಾಜ ತುರ್ತು ಸಭೆ ಕರೆದು, ಸಂತ್ರಸ್ತರಿಗೆ ನೆರವು ನೀಡಿದೆ. ಸಮಾಜದಲ್ಲಿ 15 ದಿನ ಸುಮಾರು 1,870 ಮಂದಿ ಆಶ್ರಯ ಪಡೆದುಕೊಂಡಿದ್ದರು. ಸಂತ್ರಸ್ತರಿಗೆ ಸಮಾಜ ನೆರವು ನೀಡುವ ಮೂಲಕ ನೊಂದವರ ಕೈ ಹಿಡಿಯುವಲ್ಲಿ ಪಾತ್ರ ವಹಿಸಿತ್ತು. ಮುಂದೆಯೂ ನಿರಾಶ್ರಿತರಿಗೆ ಸಹಾಯ ಮಾಡಲು ಸಮಾಜ ಕಾರ್ಯ ನಿರ್ವಹಿಸಲಿದೆ ಎಂದರು.

ನಾವೆಲ್ಲರೂ ಒಟ್ಟಾಗಿ ಸೇರಿದರೆ ನಮ್ಮಲ್ಲಿ ಒಗ್ಗಟ್ಟು ಸದಾ ಇರಲಿದೆ ಎಂದ ದೇವಯ್ಯ, ನೆರೆ ಸಂತ್ರಸ್ತರಿಗೆ ಬಂದ ಪರಿಹಾರವನ್ನು ಅವರಿಗೆ ತಲಪಿಸಲಾಗಿದೆ. ಸಮಾಜದ ವತಿಯಿಂದ ಸಾಧ್ಯವಾದಷ್ಟು ಕೆಲಸ ಮಾಡಲಾಗಿದ್ದು, ತಾವು ಮಾಡುವ ಕೆಲಸದ ಬಗ್ಗೆ ತಮಗೆ ಸಮಾಧಾನವಿರಬೇಕು ಎಂದರು.

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಪಿಯುಸಿ ವಿಭಾಗದ ಆರಂಭಕ್ಕೆ ಸಂಬಂಧಿಸಿದಂತೆ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಶಾಲೆಯಲ್ಲಿ ಪಿಯುಸಿ ವಿಭಾಗವನ್ನು ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಸರಕಾರದ ನಿಯಮದಂತೆ ಕಾಲೇಜಿನ ಒಂದು ಕೊಠಡಿ 600 ಅಡಿ ಸುತ್ತಳತೆಯನ್ನು ಹೊಂದಬೇಕು. ಆದರೆ ಶಾಲೆಯಲ್ಲಿ ಅದಕ್ಕೆ ಸ್ಥಳಾವಕಾಶ ಇಲ್ಲ. ಮುಂದಿನ ದಿನದಲ್ಲಿ ಈ ಬಗ್ಗೆ ಕಾರ್ಯಯೋಜನೆ ರೂಪಿಸಿಕೊಂಡು ಮುನ್ನಡೆಯಲಾಗುವದು ಎಂದರು.

ಸಮಾಜದ ಸದಸ್ಯರು ಮರಣಪಟ್ಟ ಸಂದರ್ಭ ನೀಡಲಾಗುವ ಮರಣನಿಧಿಯನ್ನು ಹೆಚ್ಚಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮಾಜಿ ಸಚಿವ ಯಂ.ಸಿ ನಾಣಯ್ಯ ಸಮಾಜವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ವಿಷಯವಾಗಿ ಹಲವು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ವಿವಿಧ ವಿಚಾರವಾಗಿ ಚರ್ಚೆ ನಡೆಸಿದರು. 2016-17 ನೇ ಸಾಲಿನ ಮಹಾಸಭೆಯ ನಡಾವಳಿ, ಆಡಳಿತ ಮಂಡಳಿ ವರದಿ, ಲೆಕ್ಕ ಪರಿಶೋಧನಾ ವರದಿಯನ್ನು ಅಂಗೀಕಾರ ಮಾಡಲಾಯಿತು.

ಸಭೆಯ ಆರಂಭಕ್ಕೂ ಮುನ್ನ ಸಮಾಜದ ಮೃತಪಟ್ಟ ಸದಸ್ಯರಿಗೆ, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕೊಡಗಿನಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಮೃತಪಟ್ಟವರಿಗೆ ಸಂತಾಪ