ಸೋಮವಾರಪೇಟೆ, ಸೆ. 6: ಕುಟುಂಬದ ಆಸ್ತಿ ವಿವಾದ ಹಿನ್ನೆಲೆ ತಾಯಿ, ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಸಮೀಪದ ಚೌಡ್ಲು ಗ್ರಾಮದ ದಿ.ಪೊನ್ನಪ್ಪ ಎಂಬವರ ಪತ್ನಿ ಡೀಲಾಕ್ಷಿ ಮತ್ತು ಅವರ ಮಗ ದರ್ಶನ್ ಹಲ್ಲೆಗೊಳಗಾದವರು. ಡೀಲಾಕ್ಷಿ ಅವರು ನೀಡಿದ ದೂರಿನನ್ವಯ ಚೌಡ್ಲು ಗ್ರಾಮದ ದೇವಯ್ಯ, ಗಿರೀಶ್, ಯೋಗೇಂದ್ರ, ನೆಹರು ಅವರುಗಳ ವಿರುದ್ಧ ಪಟ್ಟಣದ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.