ವೀರಾಜಪೇಟೆ, ಆ. 28: ವೀರಾಜಪೇಟೆಯ ಮಾಕ್ರ್ಸ್‍ಮೆನ್ ಸಂಸ್ಥೆಯ ವತಿಯಿಂದ ಕೈಲ್‍ಪೊಳ್ದ್ ಅಂಗವಾಗಿ ಸೆ. 3 ರಂದು ನಡೆಸಲಾಗುತ್ತಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಈ ಬಾರಿ ಪ್ರಾಕೃತಿಕ ವಿಕೋಪದ ಹಿನ್ನೆಲೆ ರದ್ದುಪಡಿಸಲಾಗಿದೆ. ಇದಕ್ಕೆ ತಗಲುತ್ತಿದ್ದ ವೆಚ್ಚವನ್ನು ಪರಿಹಾರ ನಿಧಿಗೆ ನೀಡಲಾಗುವದು ಎಂದು ಸಂಸ್ಥೆಯ ಅಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಹಾಗೂ ಕಾರ್ಯದರ್ಶಿ ಮಾದೆಯಂಡ ಸಂಪಿ ಪೂಣಚ್ಚ ಅವರು ತಿಳಿಸಿದ್ದಾರೆ.