ಪೊನ್ನಂಪೇಟೆ, ಆ. 27: ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಆಸ್ತಿ ಪಾಸ್ತಿ ನಷ್ಟ,ಪ್ರಾಣಹಾನಿ ಉಂಟಾದ ಹಿನ್ನೆಲೆಯಲ್ಲಿ ಹುದಿಕೇರಿ ಶ್ರೀ ಮಹಾದೇವರ ಅಂಜಿಕೇರಿ ನಾಡುವಿನ ತಕ್ಕ ಮುಖ್ಯಸ್ಥರುಗಳಾದ ಅಜ್ಜಿಕುಟ್ಟಿರ ಹಾಗೂ ಚೆಕ್ಕೆರ ಕುಟುಂಬಸ್ಥರು ಸೇರಿ ಅಂಜಿಕೇರಿ ನಾಡಿಗೆ ಸೇರಿದ ಕೋಣಂಗೇರಿ, ಹೈಸೊಡ್ಲೂರು, ಬೇಗೂರು, ಚಿಕ್ಕಮುಂಡೂರು, ಮುಗುಟಗೇರಿ, ನಡಿಕೇರಿ ಹಾಗೂ ತೂಚಮಕೇರಿ ಗ್ರಾಮದಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಸರಳವಾಗಿ ಆಚರಿಸುವಂತೆ ತೀರ್ಮಾನಿಸಿದ್ದಾರೆ ಎಂದು ಅಜ್ಜಿಕುಟ್ಟಿರ ಗಿರೀಶ್, ಚೆಕ್ಕೆರ ರಾಜೇಶ್, ಬಾನಂಗಡ ರಾಜಶೇಖರ್ ತಿಳಿಸಿದ್ದಾರೆ.