ಕುಶಾಲನಗರ, ಆ. 26: ಕೊಡಗು ಜಿಲ್ಲೆಯಲ್ಲಿ ನೆರೆ ಹಾವಳಿ ಹಾಗೂ ಬೆಟ್ಟ ಕುಸಿತದಿಂದ ಸಂತ್ರಸ್ತರಾದ ಜನರಿಗೆ ಆದಿಚುಂಚನಗಿರಿ ಮಠದ ಮೂಲಕ ಸಹಾಯ ಹಸ್ತ ನೀಡಲು ಚಿಂತನೆ ಹರಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.

ಅವರು ಕುಶಾಲನಗರದಲ್ಲಿ ಶ್ರೀ ಮಠದ ಅಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಂತ್ರಸ್ತರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂತ್ರಸ್ತರ ಜೀವನ ತಹಬದಿಗೆ ಬರುವ ತನಕ ಆರೋಗ್ಯ ಸೇವೆ ಮುಂದುವರೆಸಲಾಗುವದು. ಸಂತ್ರಸ್ತರ ಸಮಸ್ಯೆ ಅರಿತು ಶಾಶ್ವತ ಪರಿಹಾರ ಕಲ್ಪಿಸಲು ಶ್ರೀಮಠದ ವತಿಯಿಂದ ಪ್ರಯತ್ನಿಸಲಾಗುವದು ಎಂದರು.

ಈ ಸಂದರ್ಭ ಶ್ರೀಮಠದ ಕೊಡಗು-ಹಾಸನ ಶಾಖೆಗಳ ಉಸ್ತುವಾರಿ ಶ್ರೀ ಶಂಭುನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖೆಗಳ ಮಠಾಧೀಶರು ಇದ್ದರು.