ಮುನಿಸಿಕೊಂಡು ಉಗ್ರ ನರ್ತನ ಮಾಡಿದ ಪ್ರಕೃತಿ ಇದೀಗ ಸ್ವಲ್ಪ ತಣ್ಣಗಾಗಿದ್ದಾಳೆ. ಹತ್ತಾರು- ನೂರಾರು- ಸಹಸ್ರಾರು ಮಂದಿಗೆ ವಿವಿಧ ರೀತಿಯ ಅನುಭವದ ನೋವನ್ನು ಬಿಟ್ಟು ಹೋಗಿದೆ ಪ್ರಕೃತಿ.ನೊಂದವರು- ಕಳಕೊಂಡವರು- ನೊಂದವರಿಗೆ ನೆರವಾದವರು- ಪರಿಸ್ಥಿತಿಗಳನ್ನು ಕಣ್ಣಾರೆ ಕಂಡವರು... ಹೀಗೆ ಜನತೆಗೆ ಬದುಕಿನಲ್ಲಿ ಮರೆಯಲಾಗದ ನೆನಪುಗಳನ್ನು ಕಳೆದ ಕೆಲವು ದಿನಗಳಿಂದ ಕೊಡಗು ಕೊಟ್ಟಿದೆ.ನೈಜ ಅನುಭವಗಳು- ಜೀವನದ ಕಷ್ಟ ಸುಖಗಳನ್ನು ಇತರರಿಗೆ ಅರ್ಥೈಸಿಕೊಳ್ಳಲು ನೆರವಾಗುತ್ತವೆ. ಸುಖವನ್ನೇ ಬಯಸುವವರ ಕಣ್ತೆರೆಸುತ್ತವೆ; ಸಹಾಯ ಹಸ್ತ ಚಾಚಬೇಕೆಂಬ ಹೃದಯವಂತಿಕೆಯನ್ನು ಮೂಡಿಸುತ್ತವೆ. ಭ್ರಾತೃತ್ವದ ಅಗತ್ಯತೆಯನ್ನು ಕಲಿಸುತ್ತವೆ. ಸರಳ ಮತ್ತು ಸಹಜ ಬದುಕಿನ ಕಿವಿಮಾತನ್ನು ಹೇಳುತ್ತವೆ.ಹಾಗಾಗಿ ‘ಶಕ್ತಿ’ಯಲ್ಲಿ ಈ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ.ದಯವಿಟ್ಟು ನಿಮ್ಮ ನಿಮ್ಮ ಅನುಭವಗಳನ್ನು ಬರೆದು ಕಳುಹಿಸಿ, ನಿಮ್ಮ ಹೆಸರು- ವಿಳಾಸ- ದೂರವಾಣಿ ಸಂಖ್ಯೆಯೂ ಇರಲಿ. ಎಲ್ಲೋ ಪರೋಕ್ಷ ನೆರವಿಗೆ ನಿಮ್ಮ ಬರಹ ಸಹಾಯವಾಗಬಹುದು. ನಿಮ್ಮ ಭಾವಚಿತ್ರವಿರಲಿ, ಸಂದರ್ಭದ ಚಿತ್ರಗಳಿದ್ದರೂ ಕಳುಹಿಸಿ.

ಸಂಪಾದಕ - ಶಕ್ತಿ ದಿನಪತ್ರಿಕೆ

ಮಡಿಕೇರಿ., ಮೊ. 9448048829