ಗುಡ್ಡೆಹೊಸೂರು, ಆ. 24: ಇಲ್ಲಿನ ಶಾಲಾ ಆವರಣದಲ್ಲಿ ಪ್ರಾರಂಭಿಸಿರುವ ಗಂಜಿಕೇಂದ್ರ ಸೇರಿದಂತೆ ವಿವಿಧ ನಿರಾಶ್ರಿತರ ಶಿಬಿರಕ್ಕೆ ಬೈಲ್‍ಕೊಪ್ಪದ ಟಿಬೆಟಿಯನ್ ದೇವಸ್ಥಾನದ ವತಿಯಿಂದ ಸುಮಾರು 30000 ಕಂಬಳಿ, ತಟ್ಟೆಗಳನ್ನು ವಿತರಿಸಲಾಯಿತು. ಈ ಸಂದರ್ಭ ದೇವಸ್ಥಾನದ ಗುರುಗಳಾದ ಸೇವಾಂಗ್, ಜಿಯಾಗ್‍ಸೇರಿ, ಲೊಫ್ತೇನ್ ಹಾಗೂ ಕುಶಾಲನಗರದ ಮಾಜಿ ಕಂದಾಯಧಿಕಾರಿ ಮಹದೇವಪ್ಪ, ಜೈನಿರಾನಂದ, ಪಂ.ಪಂ. ಸದಸ್ಯ ಮಧುಸೂದನ್ ಮುಂತಾದವರು ಹಾಜರಿದ್ದರು.

ಗುಡ್ಡೆಹೊಸೂರಿನ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆಯಿಂದ ತಡರಾತ್ರಿ ವರೆಗೂ ದÀಸರಾ ಸಂದರ್ಭ ಯಾವ ರೀತಿಯಲ್ಲಿ ವಾಹನಗಳು ಮಡಿಕೇರಿಗೆ ಬರುತ್ತಿದ್ದವೂ ಅದೇ ರೀತಿ ಸಾಮಗ್ರಿಗಳನ್ನು ಹೊತ್ತ ಸಣ್ಣ ವಾಹನಗಳು ಮತ್ತು ಭಾರೀ ಪ್ರಮಾಣದ ಲಾರಿಗಳು ಮಡಿಕೇರಿಯತ್ತ ಪ್ರಯಾಣಿಸುತ್ತಿರುವದು ಕಂಡು ಬರುತ್ತಿದೆ. - ಗಣೇಶ್ ಕುಡೆಕ್ಕಲ್