ಮಡಿಕೇರಿ, ಆ.22: 2018-19ನೇ ಸಾಲಿನ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಪಿ.ಎಂ.ಇ.ಜಿ.ಪಿ ಮತ್ತು ಮುಖ್ಯಮಂತ್ರಿಯವರ ಉದ್ಯೋಗ ಸೃಜನ ಸಿ.ಎಂ.ಇ.ಜಿ.ಪಿ ಕಾರ್ಯಕ್ರಮ ದಡಿಯಲ್ಲಿ ಕೈಗಾರಿಕೆ/ ಸೇವಾ ಘಟಕ ಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ತಾ. 24 ರಂದು ಸಂದರ್ಶನವನ್ನು ಏರ್ಪಡಿಸ ಲಾಗಿತ್ತು. ಆದರೆ ಕೊಡಗಿನಲ್ಲಿ ವಿಪರೀತವಾಗಿ ಸುರಿದ ಮಳೆ ಯಿಂದಾಗಿ ಪ್ರಕೃತಿ ವಿಕೋಪ ಮತ್ತು ನೆರೆ ಹಾವಳಿ ಕಾರಣದ ಹಿನ್ನೆಲೆಯಲ್ಲಿ ಸಂದರ್ಶನ ಮುಂದೂಡಲಾಗಿದೆ. ಸಂದರ್ಶನ ದಿನಾಂಕವನ್ನು ಅಭ್ಯರ್ಥಿ ಗಳಿಗೆ ನಂತರ ತಿಳಿಸಲಾಗುವದು ಎಂದು ಮಡಿಕೇರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.