ಮಡಿಕೇರಿ, ಆ. 22: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವವರು ಬಹುಪಾಲು ಸಹಕಾರ ರಂಗಕ್ಕೆ ಸೇರಿದ ಸದಸ್ಯ ಕುಟುಂಬದ ವರಾಗಿದ್ದು, ಇವರುಗಳ ಕಷ್ಟ ಕಾರ್ಪಣ್ಯಗಳಿಗೆ ಆರ್ಥಿಕವಾಗಿ ಸಹಾಯ ಮಾಡಿ ಇವರ ಮುಂದಿನ ಭವಿಷ್ಯವನ್ನು ರೂಪಿಸಲು ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಮಡಿಕೇರಿ ಇವರ ನೇತೃತ್ವದಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪ ಹಾನಿ ಶಾಶ್ವತ ಪರಿಹಾರ ನೀಡುವ ಸಲುವಾಗಿ ‘ಸಹಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿ ಕೊಡಗು’ ಎಂಬ ವಿಪತ್ತು ಪರಿಹಾರ ನಿಧಿ ಸ್ಥಾಪಿಸಲು ಜಿಲ್ಲಾ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ನಿರ್ಧರಿಸಿದ್ದು, ಬ್ಯಾಂಕಿನ ಮುಖ್ಯ ಕಚೇರಿ ಶಾಖೆಯಲ್ಲಿ ಒಂದು ಖಾತೆಯನ್ನು ತೆರೆಯಲಾಗಿದೆ.

ಜಿಲ್ಲೆಯ ಸಹಕಾರಿ ಸಂಘಗಳು, ಸಹಕಾರಿ ನೌಕರರು, ಸಹಕಾರಿ ಗ್ರಾಹಕರು, ಸಂಘ ಸಂಸ್ಥೆಗಳು, ಸಾರ್ವಜನಿಕ ಬಂಧುಗಳು ಹಾಗೂ ದಾನಿಗಳು ತಮ್ಮ ಸಹಾಯ ಧನವನ್ನು ನಗದು / ಓಇಈಖಿ.ಖಖಿಉS/ಆಆ ಮುಖಾಂತರ ಖಾತೆ ಸಂಖ್ಯೆ 121002111114, IಈSಅ ಅಔಆಇ:ಏSಅಃ0011001 ಜಮಾ ಮಾಡಲು ಬ್ಯಾಂಕ್ ಪ್ರಕಟಣೆ ಕೋರಿದೆ.