ಮಡಿಕೇರಿ, ಆ. 2: ಈ ಚಿತ್ರಗಳನ್ನು ಗಮನಿಸಿದರೆ, ಇರುವ ಸವಲತ್ತುಗಳೆಲ್ಲವೂ ಹುಲುಮಾನವನಿಗೆ ಮಾತ್ರವೇ.., ನಮಗೂ ಬೇಕು ಎಂದು ಈ ಮೂಖ ಪ್ರಾಣಿಗಳು ಅಣಕಿಸುವಂತಿದೆ.ಮಡಿಕೇರಿಯ ಕೋಟೆ ಆವರಣದಲ್ಲಿರುವ ಜಿಲ್ಲಾ ಗ್ರಂಥಾಲಯದೊಳಗೆ ಮಳೆ - ಗಾಳಿ - ಚಳಿಯಿಂದ ರಕ್ಷಣೆ ಪಡೆಯುತ್ತಿರುವ ಪುಟ್ಟ ಕರು. ಓದು, ಬರಹ ತಿಳಿದಿದ್ದರೆ ನಾನೂ ಕೂಡ ಓದಿಬಿಡುತ್ತಿದ್ದೆ ಎನ್ನುವಂತಿದೆ.

ಯಾವತ್ತೂ ನೀವೇ ಕುಳಿತುಕೊಳ್ಳಬೇಕಾ.., ನಾವು ಕುಳಿತರೆ ಏನಾಗುತ್ತೆ? ಎಂಬಂತಿದೆ ಮಡಿಕೇರಿಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರ ಆಸನದಲ್ಲಿ ಪವಡಿಸಿರುವ ಈ ಕುರಿಗಳ ಭಂಗಿ..!

- ಸಂತೋಷ್