ನಾಪೋಕ್ಲು, ಆ. 2: ಕಕ್ಕಬೆ ಸಮೀಪದ ನಾಲಡಿ ಗ್ರಾಮದ ಕೋಡಿಮಣಿಯಂಡ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆಯಲ್ಲಿನ ಹಾಲೆಹೊಳೆಗೆ ನಿರ್ಮಿಸಿದ ಮುಳುಗು ಸೇತುವೆಯ ತಡೆಗೋಡೆ ಮಳೆಗೆ ಕೊಚ್ಚಿಹೋಗಿದ್ದು, ರಸ್ತೆ ಅಪಾಯದ ಅಂಚಿಗೆ ತಲಪಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಡಿಮಣಿಯಂಡ ಕುಟುಂಬಸ್ಥರು ಒತ್ತಾಯಿಸಿದ್ದಾರೆ.