ಸುಂಟಿಕೊಪ್ಪ, ಜು. 29: ಸೇತುವೆಯ ಕಂಬದಿಂದ ಮರವೊಂದು ಹುಟ್ಟಿ ಬೆಳೆದಿದ್ದು ಸೇತುವೆ ಕುಸಿಯುವ ಹಂತಕ್ಕೆ ತಲಪಿದೆ. ಐಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಯಡವನಾಡು. ಯಡವಾರೆ. ಸಜ್ಜಳ್ಳಿ ಮತ್ತು ಹಾರಂಗಿಯಿಂದ ಐಗೂರಿಗೆ ಸೇರುವ ರಸ್ತೆಗೆ ಚೋರನ ಹೊಳೆ ಸೇತುವೆಯ ಕಂಬದಲ್ಲಿ ಮರವೊಂದು ಹುಟ್ಟಿ ಬೆಳೆದು ನಿಂತಿದ್ದು ಸೇತುವೆಯ ಕಂಬ ಬಿರುಕು ಬಿಟ್ಟಿದೆ. ಈ ಮರವನ್ನು ತೆರವುಗೊಳಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.