ಸಿದ್ದಾಪುರ, ಜು. 28: ಓಡಿಪಿ ಸಂಸ್ಥೆ ಮೈಸೂರು ಮತ್ತು ನಬಾರ್ಡ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಹೊಲಿಗೆ ಮತ್ತು ವಸ್ತ್ರ ವಿನ್ಯಾಸ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಇಲ್ಲಿನ ಸೆಂಟಿನರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ, ಬೆಟ್ಟದಕಾಡು ಮತ್ತು ಪಾಲಿಬೆಟ್ಟದ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ 96 ಜನರಿಗೆ ಸಂಸ್ಥೆಯು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಸಿದ್ದಾಪುರ ಸಂತ ಜೋಸೆಫರ ದೇವಾಯದ ಧರ್ಮಗುರು ಪಿ. ಜೋನೆಸ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ ವಹಿಸಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಮ್ತಾಜ್ ಇಲಾಖೆಯ ಮತ್ತು ತರಬೇತಿ ಶಿಬಿರದ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ನಬಾರ್ಡ್ ಜಿಲ್ಲಾ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ, ಓಡಿಪಿ ಮೈಸೂರು ಸಂಯೋಜಕಿ ಮೋಲಿ ಘಡ್ತಾದೋ, ನೆಲ್ಲಿಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ದೇವರಾಜ್ ಹಿಂದುಳಿದ ಅಭಿವೃದ್ಧಿ ನಿಗಮ ಅಧಿಕಾರಿಣಿ ಮಹಾದೇವಿ, ಓಡಿಪಿ ಸಂಯೋಜಕಿ ಜಾಯ್ಸ್ ಮೆನೇಜಸ್, ಕಾರ್ಯಕರ್ತೆ ಶರ್ಮಿಳಾ ಅನೀಶ್, ವಿಜಯಾ ನಾರಾಯಣ, ಲೀನಾ ಲೋಬೋ ಮತ್ತು ಇತರರು ಇದ್ದರು.