ಶನಿವಾರಸಂತೆ, ಜು. 28: ಆಲೂರು ಸಿದ್ದಾಪುರದ ಬಂಡಿಯಮ್ಮ ದೇವಾಲಯದಲ್ಲಿ ಕಳ್ಳರು ಸುಮಾರು 8 ಸಾವಿರ ರೂ. ಬೆಲೆ ಬಾಳುವ ಎರಡು ದೀಪಗಳನ್ನು ತಾ. 27ರ ರಾತ್ರಿ ಕಳವು ಮಾಡಿದ್ದಾರೆ. ಮಾತ್ರವಲ್ಲದೆ ದೇವಾಲಯ ಬಳಿಯಿರುವ ಮಹಿಳಾ ಸಮಾಜ ಹಾಗೂ ಅಂಗನವಾಡಿ ಕಟ್ಟಡದ ಬಾಗಿಲು ಮುರಿದು ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸರಕಾರಿ ಪ್ರಾಥಮಿಕ ಶಾಲಾ ಉಗ್ರಾಣ ಕೊಠಡಿಗೂ ನುಗ್ಗಿ ಗುದ್ದಲಿ ಹಾಗೂ ವಾಲಿಬಾಲನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.