ಮಡಿಕೇರಿ, ಜು. 19: ಕಡಗದಾಳು ಗ್ರಾಮದ ಗಂಗಾ ಹೀನಾ ಬಸೀನ್ ಅವರು ಕಡಗದಾಳು ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ಉತ್ತೀರ್ಣರಾದ ಎಂ.ಎಸ್. ಹಸೀನಾ, ಟಿ.ಟಿ. ರಾಮಚಂದ್ರ, ನಿಜಾಮುದ್ದೀನ್ ಈ ಮೂವರು ವಿದ್ಯಾರ್ಥಿಗಳಿಗೆ ನಗದು ಹಣ ನೀಡಿದರು. ಮಾತ್ರವಲ್ಲದೆ ಶಾಲಾ ನಾಮಫಲಕ, ಕೈ ತೊಳೆಯುವ ಸಿಂಕ್, ಒಂದನೇ ತರಗತಿಯಿಂದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಏಕ ರೀತಿಯ ಸ್ವೆಟರ್ ಹೀಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.