ಮಡಿಕೇರಿ, ಜು.13 : ನಮಾಮಿ ಕಾವೇರಿ ಆಂದೋಲನ ಮೂಲಕ ತಾ. 16ರಂದು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ವ್ಯಾಪ್ತಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ತೀವ್ರ ಮಳೆಯ ಕಾರಣ ಮುಂದೂಡಲಾಗಿದೆ ಎಂದು ಈ ಆಂದೋಲನದ ಸಂಚಾಲಕ ಚಕ್ಕೇರ ಮನು ಕಾವೇರಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಮುಂದೂಡಿದ ಕಾರ್ಯ ಕ್ರಮದ ದಿನವನ್ನು ಮತ್ತೆ ಪ್ರಕಟಿಸುವ ದಾಗಿ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.