ವೀರಾಜಪೇಟೆ, ಜು. 10: ವೀರಾಜಪೇಟೆ ಬಳಿಯ ಬಿಟ್ಟಂಗಾಲ, ನಾಂಗಾಲ, ತೋತೇರಿ ಭಾಗಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ನಿನ್ನೆ ರಾತ್ರಿ ಬಿಟ್ಟಂಗಾಲ ಗ್ರಾಮದ ಪೊನ್ನಿರ ಸ್ನೇಕ್ ಗಗನ್ ಅವರ ಕಾಫಿ ತೋಟವನ್ನು ಸಂಪೂರ್ಣ ಹಾಳು ಮಾಡಿದಲ್ಲದೆ ಕಾಫಿ ಗಿಡಗಳು ಹಾಗೂ 12 ತೆಂಗಿನ ಮರಗಳನ್ನು ನಾಶ ಮಾಡಿದೆ. ಅರಣ್ಯ ಇಲಾಖೆಗೆ ದೂರು ನೀಡಿದರೂ ಏನು ಪ್ರಯೋಜನವಾಗಿಲ್ಲ ಎಂದು ಪೊನ್ನಿರ ಗಗನ್ ಅಳಲು ತೋಡಿಕೊಂಡಿದ್ದಾರೆ.

ಕಾಡಾನೆಗಳನ್ನು ಕಾಡಿಗೆ ಅಟ್ಟಿದರೆ ಸಾಲದು, ಕಾಡಾನೆಗಳು ನಾಡಿಗೆ ಬಾರದ ರೀತಿಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆ 10 ದಿನಗಳ ಗಡುವು ನೀಡಿ ಗ್ರಾಮಸ್ಥರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ.