ಹಿನ್ನೀರಿನಲ್ಲಿ ಸೌಧೆ ಲಾಭ : ಹಾರಂಗಿ ಜಲಾಶಯದ ಹಿನ್ನೀರು ಮಾದಾಪುರ ಬಳಿಯ ಗರಗಂದೂರುವರೆಗೆ ವ್ಯಾಪಿಸುತ್ತದೆ. ಗರಗಂದೂರಿನಲ್ಲಿ ಹಳೇ ಸೇತುವೆ ಮುಳುಗಡೆಗೊಂಡಿದೆ. ಇತ್ತ ಹಿನ್ನೀರು ಪ್ರದೇಶದ ತಟದಲ್ಲಿ ಅಲೆಗಳ ಹೊಡೆತದೊಂದಿಗೆ ಮರದ ತುಂಡುಗಳು ಅಕ್ಕಪಕ್ಕದವರಿಗೆ ಸೌಧೆಯಾಗಿ ಲಾಭವಾಗುತ್ತಿದೆ.

- ಪ್ರಕಾಶ್ ವಿ.ವಿ.ಕಾರಿನ ಮೇಲೆ ಕಂಬ : ಮಡಿಕೇರಿ - ಸೋಮವಾರಪೇಟೆ ರಸ್ತೆಯ ಕನ್ನಂಡಬಾಣೆ ಬಳಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿತ್ತು. ಕಂಬ ಕಾರಿನ ಮೇಲೆ ಬಿದ್ದಿದ್ದರೂ ಸಂಜೆವರೆಗೂ ಕಂಬವನ್ನು ತೆರವುಗೊಳಿಸದಿರುವದು ದುರಂತ. ಸದ್ಯ ಅಪಾಯ ಸಂಭವಿಸಿಲ್ಲ.

- ಲೋಹಿತ್‍ಮರ ಬೀಳಬೇಕೇ..? : ಮಡಿಕೇರಿಯ ಸಂತ ಜೋಸೆಫರ ಶಾಲಾ ಬಳಿ ಇರುವ ಫೀ.ಮಾ. ಕಾರ್ಯಪ್ಪ ಕಾಲೇಜಿಗೆ ಸೇರಿದ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಮರವೊಂದು ಬೀಳುವ ಸ್ಥಿತಿಯಲ್ಲಿದೆ. ರಸ್ತೆಯಲ್ಲಿ ಮಕ್ಕಳು ಓಡಾಡುತ್ತಾರೆ. ಮಕ್ಕಳ ಕರೆದೊಯ್ಯುವ ವಾಹನಗಳು ನಿಂತಿರುತ್ತದೆ. ಅಪಾಯ ಸಂಭವಿಸುವ ಮುನ್ನ ಎಚ್ಚರ ವಹಿಸಿ.

- ಉಮೇಶ್, ದೇಚೂರುರಸ್ತೆ ಗುಂಡಿ : ಮಡಿಕೇರಿ ಅರಣ್ಯ ಭವನ ಬಳಿಯ ರಸ್ತೆ ಗುಂಡಿ ಅಪಾಯವನ್ನು ಆಹ್ವಾನಿಸುತ್ತಿದೆ. ಇಲಾಖೆ ನಿದ್ರೆ ಮಾಡುತ್ತಿದೆಯೇ?

- ಕೆ.ಜೆ. ಸುಬ್ಬಯ್ಯ, ಮಡಿಕೇರಿ