ಕುಶಾಲನಗರ, ಜೂ. 23: ಕುಶಾಲನಗರ ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ನಿರೀಕ್ಷಕರು ಪಟ್ಟಣದ ಹೊಟೇಲ್‍ಗಳಿಗೆ ದಿಢೀರ್ ಧಾಳಿ ನಡೆಸಿ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು.

ಪಟ್ಟಣ ವ್ಯಾಪ್ತಿಯ ಹೊಟೇಲ್ ಗಳಿಗೆ ಧಾಳಿ ನಡೆಸಿದ ಅಧಿಕಾರಿಗಳು ಹೊಟೇಲ್‍ಗಳ ಅಡುಗೆ ಕೋಣೆ, ಶೌಚಾಲಯಗಳ, ಆಹಾರ ಕುಶಾಲನಗರ, ಜೂ. 23: ಕುಶಾಲನಗರ ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ನಿರೀಕ್ಷಕರು ಪಟ್ಟಣದ ಹೊಟೇಲ್‍ಗಳಿಗೆ ದಿಢೀರ್ ಧಾಳಿ ನಡೆಸಿ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು.

ಪಟ್ಟಣ ವ್ಯಾಪ್ತಿಯ ಹೊಟೇಲ್ ಗಳಿಗೆ ಧಾಳಿ ನಡೆಸಿದ ಅಧಿಕಾರಿಗಳು ಹೊಟೇಲ್‍ಗಳ ಅಡುಗೆ ಕೋಣೆ, ಶೌಚಾಲಯಗಳ, ಆಹಾರ ಪರವಾನಗಿ ಕೂಡ ಪಡೆಯದೆ ನಿರ್ಲಕ್ಷ್ಯ ವಹಿಸಿರುವದು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಹೊಟೇಲ್ ಮಾಲೀಕ ರಿಗೆ ನೋಟಿಸ್ ಜಾರಿಗೊಳಿಸಲು ಕ್ರಮಕೈಗೊಂಡರು.

ಇದೇ ಸಂದರ್ಭ ಪಟ್ಟಣ ವ್ಯಾಪ್ತಿಯ ಮಾಂಸ ಮಾರಾಟ ಮಳಿಗೆಗಳು ಸೇರಿದಂತೆ ಹೊಟೇಲ್‍ಗಳ ಮಾಲೀಕರಿಗೆ ಅಗತ್ಯವಾಗಿ ಆಹಾರ ಸುರಕ್ಷತಾ ಪರವಾನಗಿ ಪಡೆದುಕೊಳ್ಳು ವಂತೆ ಆರೋಗ್ಯ ನಿರೀಕ್ಷಕ ಮುಖೇಶ್ ವಾಲಿಕರ್ ಸೂಚಿಸಿದರು.

ಪಂಚಾಯ್ತಿಯ ಆರೋಗ್ಯ ನಿರೀಕ್ಷಕ ಸತೀಶ್‍ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಕೀಲ್ ಅಹಮ್ಮದ್, ಪೌರಕಾರ್ಮಿಕರಾದ ಗಣೇಶ್, ಮೋಹನ್, ವಸಂತ ಮತ್ತಿತರರು ಇದ್ದರು.