ವೀರಾಜಪೇಟೆ, ಜೂ. 20: ಮಡಿಕೇರಿ ವಿಭಾಗದ ಲೋಕಾಯುಕ್ತ ನಿರೀಕ್ಷಕರಾದ ಪೂಣಚ್ಚ ತಂಡ ಇಂದು ಇಲ್ಲಿನ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಿದರು. ಇವರೊಂದಿಗೆ ಸಹಾಯಕರಾಗಿ ಸಿಬ್ಬಂದಿಗಳಾದ ಲೋಕೇಶ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.