ಮಡಿಕೇರಿ, ಮೇ 26: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧವಾದ ಕಾನೂನು ರಚನೆಗೆ ಆಗ್ರಹಿಸಿ ಸಿಎನ್‍ಸಿ ವತಿಯಿಂದ ವಾಹನ ಜಾಥಾಕ್ಕೆ ಮೈಸೂರಿನಲ್ಲಿ ಸ್ವಾಗತ ಕೋರಲಾಯಿತು. ಮೈಸೂರಿನಲ್ಲಿರುವ ಕೊಡಗಿನ ಹೆಣ್ಣುಮಕ್ಕಳು ಗಡಿಯಲ್ಲಿ ನಿಂತು ಹೂ ಹಾರದೊಂದಿಗೆ ಬರಮಾಡಿಕೊಂಡು ನಂತರ ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಜಾಥಾದ ಉದ್ದೇಶವನ್ನು ತಿಳಿಸಿದರು.