ಬೆಂಗಳೂರು, ಮೇ 12: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಬೇರ್ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಿದುದರಿಂದ ತಮ್ಮ ಪರವಾಗಿ ಮತ ಚಲಾಯಿಸಿಕೊಳ್ಳಲಾಗಿಲ್ಲ. ಆದರೂ ತಮ್ಮ ಮತ ಇರುವ ಕ್ಷೇತ್ರಗಳಿಗೆ ತೆರಳಿ ಮತ ಚಲಾಯಿಸಿದ್ದಾರೆ.

ಮರು ಮತದಾನ

ಬೆಂಗಳೂರು, ಮೇ 12: ಹೆಬ್ಬಾಳದ ಲೊಟ್ಟಗೊಲ್ಲಹಳ್ಳಿಯ 158ನೇ ಮತಗಟ್ಟೆಯ 2ನೇ ಬೂತ್‍ನ ಮತಯಂತ್ರ ಕೆಟ್ಟಿದ್ದ ಕಾರಣ ಅಲ್ಲಿ ಮತದಾನ ನಡೆಯಲಿಲ್ಲ. ಇಲ್ಲಿ ಮರು ಮತದಾನ ನಡೆಯಲಿದೆ.