ಮಡಿಕೇರಿ, ಮಾ. 31: ಮಲೆಯಾಳಿ ಸಮುದಾಯದ ಮತದಾರರು ಯಾವದೋ ಒಂದು ಪಕ್ಷಕ್ಕೆ ಸೀಮಿತರಾದವರಲ್ಲ ಎಂದು ಸ್ಪಷ್ಟಪಡಿಸಿರುವ ಜೆಡಿಎಸ್‍ನ ಶನಿವಾರಸಂತೆ ಹೋಬಳಿ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಪರಮೇಶ್ವರ್ ಯಾವ ಪಕ್ಷಕ್ಕೆ ಮತ ನೀಡಬೇಕೆನ್ನುವ ರಾಜಕೀಯ ಪ್ರಜ್ಞೆ ಈ ಸಮುದಾಯಕ್ಕೆ ಇದೆ ಎಂದು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಪಕ್ಷವೊಂದರ ಪ್ರಮುಖರು ಮಲೆಯಾಳಿ ಸಮುದಾಯದ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶ್ರೀನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ಸಮಾಜದ ಮುಖ್ಯ ವಾಹಿನಿಯಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ಸಾಗಿಸುತ್ತಿರುವ ಮಲೆಯಾಳಿ ಸಮುದಾಯ ತಮ್ಮ ಹಿತ ಕಾಯುವ ಜಾತ್ಯತೀತ ಮನೋಭಾವದ ಪಕ್ಷದ ಅಭ್ಯರ್ಥಿಗೆ ಮತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.