ವೀರಾಜಪೇಟೆ, ಮಾ. 29: ಪರಿಮಳ ಸ್ವಸಹಾಯ ಸಂಘವು ಮಹಿಳೆಯರಿಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸುವದರೊಂದಿಗೆ ವಾರ್ಷಿಕ ಸಮಾರಂಭ ಆಚರಿಸಿತು.

ವೀರಾಜಪೇಟೆಯ ಆರ್ಜಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಪೆರುಂಬಾಡಿ ಚೆಕ್ ಪೊಸ್ಟ್ ಬಳಿಯಿರುವ ಮಹಿಳಾ ಸದಸ್ಯರು 2003 ರಲ್ಲಿ ಹುಟ್ಟುಹಾಕಿರುವ ಪರಿಮಳ ಸ್ವ ಸಹಾಯ ಸಂಘವು ತನ್ನ 15 ನೇ ವಾರ್ಷಿಕೋತ್ಸವ ಸಮಾರಂಭವನ್ನು ಶ್ರೀ ಅಯ್ಯಪ್ಪ ಕಲಾ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಿತ್ತು. ಸಮಾರಂಭದ ಉದ್ಘಾಟನೆಯನ್ನು ಶ್ರೀ ಚಾಮುಂಡಿ ದೇವಾಲಯದ ಅಡಳಿತ ಮಂಡಳಿಯ ಅಧ್ಯಕ್ಷ ಕಾವೇರಪ್ಪ ನೆರವೇರಿಸಿದರು. ಓ.ಡಿ.ಪಿ. ಸಂಸ್ಥೆಯ ವಲಯಾಧಿಕಾರಿ ಜಾಯ್ಸ್ ಮೆನೇಜಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯ ಅಧ್ಯಕ್ಷ ಕೆ.ಕೆ. ಅನಿಲ್ ಕುಮಾರ್, ಪರಿಮಳ ಸ್ವಸಹಾಯ ಸಂಘದ ಅಧ್ಯಕ್ಷೆ ಅನು ಹರೀಶ್, ಚೈತನ್ಯ ಸ್ವ ಸಹಾಯ ಸಂಘದ ಅಧ್ಯಕ್ಷೆ ನಳಿನಿ, ಓ.ಡಿ.ಪಿ. ಸಂಸ್ಥೆಯ ಕಾರ್ಯಕರ್ತರಾದ ವೇಸ್ಟ, ರೀಟಾ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಜಾ ಜಯಕುಮಾರ್ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯ ಕಾರ್ಯದರ್ಶಿ ಸಿ.ಅರ್. ಬಾಬು ಉಪಸ್ಥಿತರಿದ್ದರು.