ವೀರಾಜಪೇಟೆ, ಮಾ. 29: ಬಿಟ್ಟಂಗಾಲ ಕಂಪೆನಿಮೊಟ್ಟೆಯ ಮುತ್ತಪ್ಪ ದೇವಸ್ಥಾನದ ವತಿಯಿಂದ ವರ್ಷಂಪ್ರತಿಯಂತೆ ಏ. 3 ಹಾಗೂ 4 ರಂದು 26ನೇ ವರ್ಷದ ಮುತ್ತಪ್ಪ ತೆರೆ ಮಹೋತ್ಸವವನ್ನು ಆಚರಿಸಲಾಗುವದು ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ವಿ. ಸುಬ್ರಮಣಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಬ್ರಮಣಿ, ಏ. 3 ರಂದು ರಾತ್ರಿ 7 ಗಂಟೆಗೆ ಮುತ್ತಪ್ಪ ವೆಳ್ಳಾಟಂನೊಂದಿಗೆ ಮುತ್ತಪ್ಪ ತೆರೆಗೆ ಚಾಲನೆ ನೀಡಲಾಗುವದು. 9 ಗಂಟೆಗೆ ಅನ್ನದಾನ, 1 ಗಂಟೆಗೆ ಬಸುರಿಮಲ ದೇವರ ತೆರೆ, ಏ. 4 ರಂದು ಬೆಳಿಗ್ಗೆ 7 ಗಂಟೆಗೆ ಮುತ್ತಪ್ಪ ವೆಳ್ಳಾಟಂ ಹಾಗೂ 9 ಗಂಟೆಗೆ ಬಸುರಿಮಲ ತೆರೆ, ಅಪರಾಹ್ನ 12 ಗಂಟೆಗೆ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ತುಳಸಿ, ಸಮಿತಿ ಸದಸ್ಯರುಗಳಾದ ಮೋಹನ್, ಶಶಿಧರ್ ಉಪಸ್ಥಿತರಿದ್ದರು.