ಮಡಿಕೇರಿ, ಮಾ. 28: ಸೋಮವಾರಪೇಟೆ ತಾಲೂಕು ಪಂಚಾಯಿತಿ ಬಿಜೆಪಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಪತ್ರಿಕಾಗೋಷ್ಠಿ ಮಾಡಿ ಪಕ್ಷದ ಸೈದ್ಧಾಂತಿಕ ವಿಚಾರಧಾರೆಯ ವಿರುದ್ಧ ಮಾತನಾಡಿದ್ದು, ಅದನ್ನು ಪಕ್ಷ ವಿರೋಧಿ ಚುಟವಟಿಕೆಯೆಂದು ಪರಿಗಣಿಸಿ ಈ ಕಾರಣಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಯಾಕೆ ಕೈಗೊಳ್ಳಬಾರದು? ಎಂದು ಕಾರಣ ಕೇಳಿ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಅವರು ನೋಟೀಸು ಜಾರಿ ಮಾಡಿದ್ದಾರೆ. ನೋಟೀಸಿಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.