ಸೋಮವಾರಪೇಟೆ, ಮಾ.27 : ನಾಲ್ಗುಡಿ ಸಂಸ್ಥೆಯ ವತಿಯಿಂದ ಏ.2ರಂದು ಪೂರ್ವಾಹ್ನ 11 ಗಂಟೆಗೆ ಇಲ್ಲಿನ ಪತ್ರಿಕಾಭವನದಲ್ಲಿ ಆನ್‍ಲೈನ್ ರಕ್ತನಿಧಿ ಕಾರ್ಯಕ್ಕೆ ಚಾಲನೆ ನೀಡಲಾಗುವದು ಎಂದು ಸಂಸ್ಥೆಯ ನಿರ್ದೇಶಕ ಚಾಮೇರ ದಿನೇಶ್ ತಿಳಿಸಿದ್ದಾರೆ.

ಉದ್ಯಮಿಗಳಾದ ನಾಪಂಡ ಮುತ್ತಪ್ಪ ಅವರು ರಕ್ತನಿಧಿಗೆ ಚಾಲನೆ ನೀಡಲಿದ್ದು, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಮಹೇಶ್, ಕರವೇ ತಾಲೂಕು ಅಧ್ಯಕ್ಷ ದೀಪಕ್, ವಿವೇಕಾನಂದ ಯುವ ಬ್ರಿಗೇಡ್ ಸಂಚಾಲಕ ಅಭಿಷೇಕ್ ಅವರುಗಳು ಭಾಗವಹಿಸಲಿದ್ದಾರೆ ಎಂದು ದಿನೇಶ್ ಮಾಹಿತಿ ನೀಡಿದ್ದಾರೆ.