ವೀರಾಜಪೇಟೆ, ಮಾ. 26: ಮಾಯಮುಡಿ ಸಹಕಾರ ಸಂಘದಲ್ಲಿ ರೂ.1,40,000 ಹಣ ದುರುಪ ಯೋಗದ ಕ್ರಿಮಿನಲ್ ಪ್ರಕರಣದಿಂದ ಆರೋಪಿ ಎಂ.ಎ.ನಂದನು ಎಂಬವರು ದೋಷ ಮುಕ್ತರೆಂದು ಪೊನ್ನಂಪೇಟೆ ಸಿವಿಲ್ ಜಡ್ಜ್ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನಗೌಡ ಅವರು ತೀರ್ಪು ನೀಡಿ ಆರೋಪದಿಂದ ಬಿಡುಗಡೆಗೊಳಿಸಿದ್ದಾರೆ.

ಕಳೆದ ತಾ: 2-11-1998 ಹಾಗೂ 31-1-2000 ದ ಅವಧಿಯಲ್ಲಿ ವಿ.ಎಸ್.ಎಸ್.ಎನ್ ಬ್ಯಾಂಕಿನ ನಗದು ಗುಮಾಸ್ತೆ ಹಾಗೂ ಪ್ರಬಾರ ಕಾರ್ಯದರ್ಶಿಯಾಗಿದ್ದ ಎಂ.ಎ. ನಂದನು ಅವರು ರೂ 1,40,000 ನಗದು ಹಣವನ್ನು ದುರುಪಯೋಗ ಪಡಿಸಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತು ಪಡಿಸಲು ಸಹಾಯಕ ಅಭಿಯೋಜಕರು ವಿಫಲಗೊಂಡ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ. ಆರೋಪಿ ಪರ ವಕೀಲ ಬಿ. ರತ್ನಾಕರ ಶೆಟ್ಟಿ ವಾದಿಸಿದರು.