ಚೆಟ್ಟಳ್ಳಿ, ಮಾ. 25: ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆದ ಫ್ಯಾಮಿಲಿ ಪವರ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಕುಟುಂಬದ ತಂಡ ಶೋನಲ್ಲಿ ಗೆದ್ದ ಹಣ ರೂ. 2 ಲಕ್ಷವನ್ನು ಹುತಾತ್ಮ ಜಾವೀದ್ ಕುಟುಂಬಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಕಾರ್ಯಕ್ರಮದಲ್ಲಿ ಬೊಳ್ಳಜಿರ ಯಶೋಧ ಬೋಪಯ್ಯ, ಏರ್‍ಫೋರ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೊಳ್ಳಜಿರ ನಂಜಪ್ಪ, ಪತ್ನಿ ರಕ್ಷಿತಾ ನಂಜಪ್ಪ, ಬೊಳ್ಳಜಿರ ಯಮುನಾ ಅಯ್ಯಪ್ಪ, ಬೊಳ್ಳಜಿರ ದೇಚಮ್ಮ ಹಾಗೂ ಜಾವೀದ್ ಕುಟುಂಬದ ಫಾತಿಮಾ, ಕೆ. ಸಲೀಂ, ಅಸ್ಮಬಾನು, ಹಬೀಬುಲ್ಲಾ, ಯಾಸಿನ್ ಪಾಲ್ಗೊಂಡಿದ್ದರು.

ಈ ರಿಯಾಲಿಟಿ ಶೋ ಕಾರ್ಯಕ್ರಮವು ಯೋಧರ ಬಗ್ಗೆ ನಡೆಯಿತು. ಮೆಡ್ರಾಸ್ ರೆಜಿಮೆಂಟ್ ಸೆಂಟರ್‍ನ ನಿವೃತ್ತ ಯೋಧ ಇಟ್ಟಿರ ಯೋಗೇಶ್ ಯೋಧರು ದೇಶಕ್ಕೆ ಸಲ್ಲಿಸುತ್ತಿರುವ ಸೇವೆಯ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು.