ಸೋಮವಾರಪೇಟೆ, ಮಾ. 23: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಾಂತಳ್ಳಿ ವಲಯಕ್ಕೆ ಒಳಪಡುವ ಚೌಡ್ಲು-ಗಾಂಧಿನಗರ ಗ್ರಾಮದ ಸುಬ್ರಮಣ್ಯ ಸ್ವಸಹಾಯ ಸಂಘದ 9ನೇ ವಾರ್ಷಿಕೋತ್ಸವ ಆಲೇಕಟ್ಟೆ ಗ್ರಾಮದಲ್ಲಿ ನಡೆಯಿತು.

ಶಾಂತಳ್ಳಿ ವಲಯದ ಮೇಲ್ವಿಚಾರಕಿ ರೇವತಿ, ಚೌಡ್ಲು ಸೇವಾ ಪ್ರತಿನಿಧಿ ಸುನಿತಾ, ಕಲ್ಕಂದೂರು ಕಾರ್ಯಕ್ಷೇತ್ರದ ನಿಖಿತ ಸೇರಿದಂತೆ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.