ಗೋಣಿಕೊಪ್ಪಲು, ಮಾ. 23: ಜೋಡುಬೀಟಿಯ ಒಂಬತ್ತು ಕುಡಿ ಈಶ್ವರ ಸಂಘದಿಂದ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾಟಕ್ಕೆ ಗ್ರಾ.ಪಂ. ಸದಸ್ಯ ಅಮ್ಮತೀರ ಸುರೇಶ್ ಚಾಲನೆ ನೀಡಿದರು.

ಗ್ರಾ.ಪಂ. ಸದಸ್ಯೆ ಜಯಲಕ್ಷ್ಮಿ, ಗ್ರಾಮದ ಜಯ, ಚಿಮ್ಮ ಅಯ್ಯಪ್ಪ, ಶಾಜಿ ಅಚ್ಚುತ್ತನ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಪಂದ್ಯಾಟದಲ್ಲಿ 7 ತಂಡಗಳು ಭಾಗವಹಿಸಿದ್ದವು.