ಕುಶಾಲನಗರ, ಮಾ. 21: ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳಾ ಸಿಬ್ಬಂದಿಗಳಿಗೆ ಉದ್ಯಮಿ ಉಮಾಶಂಕರ್ ದಿನಸಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 25ಕ್ಕೂ ಅಧಿಕ ಬಿಸಿಯೂಟ ತಯಾರಕರಿಗೆ ಉಮಾಶಂಕರ್ ತಮ್ಮ ತಾಯಿಯ ಸ್ಮರಣಾರ್ಥ ಯುಗಾದಿ ಹಬ್ಬದ ಅಂಗವಾಗಿ ವಿತರಣೆ ಮಾಡಿದರು.