ಕುಶಾಲನಗರ, ಮಾ. 10: ಕುಶಾಲನಗರದ ಶ್ರೀ ಕೋಣಮಾರಿಯಮ್ಮ ಪೈಂಟರ್ಸ್ ಸಂಘ ಉದ್ಘಾಟನೆ ನಡೆಯಿತು. ಕೋಣಮಾರಿಯಮ್ಮ ದೇವಾಲಯ ಆವರಣದಲ್ಲಿ ಕಾರ್ಯಕ್ರಮವನ್ನು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರು ತಮ್ಮ ಕೆಲಸದೊಂದಿಗೆ ಕುಟುಂಬದ ಭದ್ರತೆಯ ಬಗ್ಗೆ ಚಿಂತನೆ ಹರಿಸಬೇಕೆಂದರು.

ಕಾರ್ಯಕ್ರಮದಲ್ಲಿ ಐಎನ್‍ಟಿಯುಸಿ ಜಿಲ್ಲಾ ಅಧ್ಯಕ್ಷ ಟಿ.ಪಿ. ಹಮೀದ್, ಕಾರ್ಯದರ್ಶಿ ಗೋವಿಂದರಾಜ್ ದಾಸ್, ಕುಶಾಲನಗರ ಡಿವೈಎಸ್ಪಿ ಮುರಳೀಧರ್ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಮಂಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಹಾಯಕ ಠಾಣಾಧಿಕಾರಿ ಗೋಪಾಲ್, ಸಂಘದ ಪದಾಧಿಕಾರಿಗಳಾದ ಈಶ್ವರ್, ಲವ ಮತ್ತಿತರರು ಪಾಲ್ಗೊಂಡಿದ್ದರು.