ಸೋಮವಾರಪೇಟೆ, ಮಾ. 10: ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಐಎನ್‍ಟಿಯುಸಿ)ನ ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯಿತು.

ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಐಎನ್‍ಟಿಯುಸಿ ಅಧ್ಯಕ್ಷರನ್ನಾಗಿ ಕೂತಿ ಗ್ರಾಮದ ಶಿವರಾಜ್ ಅವರನ್ನು ನೇಮಿಸಲಾಯಿತು. ಕಾರ್ಯದರ್ಶಿಯನ್ನಾಗಿ ಮಧು ಹರೀಶ್, ಜಿಲ್ಲಾ ಕಾರ್ಯದರ್ಶಿಯಾಗಿ ಚಂದ್ರಾಜು, ಎಸ್‍ಸಿ ಘಟಕದ ಅಧ್ಯಕ್ಷರನ್ನಾಗಿ ಯಲಕನೂರು ರಾಜು, ಬಿಲ್ಲವ ಘಟಕದ ಅಧ್ಯಕ್ಷರನ್ನಾಗಿ ಯಶೋಧರ, ಮಹಿಳಾ ಘಟಕದ ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ಭಾಗ್ಯ, ಕ್ಷೇತ್ರ ಸಮಿತಿ ಉಪಾಧ್ಯಕ್ಷರನ್ನಾಗಿ ಕುಟ್ಟಪ್ಪ, ಜಗದೀಶ್, ಕಾರ್ಯಕಾರಿ ಸಮಿತಿಗೆ ಪ್ರಕಾಶ್, ಚನ್ನಪ್ಪ ಅವರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎನ್‍ಟಿಯುಸಿ ಜಿಲ್ಲಾ ಉಪಾಧ್ಯಕ್ಷ ಹೊಸಬೀಡು ಹೂವಯ್ಯ ವಹಿಸಿದ್ದರು. ವೇದಿಕೆಯಲ್ಲಿ ವಕ್ತಾರ ಅಜ್ಜಳ್ಳಿ ರವಿ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಅಶ್ರಫ್, ಜಿಲ್ಲಾ ಯುವ ಘಟಕದ ಪವನ್ ಪೆಮ್ಮಯ್ಯ, ನಗರಾಧ್ಯಕ್ಷ ಗಣೇಶ್, ಬ್ಲಾಕ್ ಉಪಾಧ್ಯಕ್ಷ ಪವನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾಂತಳ್ಳಿ ಮಧು ಅವರುಗಳು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.