ಉಪನ್ಯಾಸಕರ ಸಂಘಕ್ಕೆ ಆಯ್ಕೆ

ಕುಶಾಲನಗರ: ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸುಂಟಿಕೊಪ್ಪ ಕಾಲೇಜು ಉಪನ್ಯಾಸಕ ಫಿಲಿಪ್‍ವಾಸ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಬಾಳೆಲೆಯ ಕೆ.ಜೆ. ಅಶ್ವಿನಿ ಕುಮಾರ್, ಉಪಾಧ್ಯಕ್ಷರುಗಳಾಗಿ ಮರಗೋಡಿನ ಕೆ.ಎಸ್. ಕೃಷ್ಣ, ಪೊನ್ನಂಪೇಟೆಯ ಆರ್. ರಮೇಶ್, ಕುಶಾಲನಗರದ ಕೆ.ಎಸ್. ರುದ್ರಪ್ಪ, ಸೋಮವಾರಪೇಟೆಯ ತಿಲೋತ್ತಮ, ಪ್ರಧಾನ ಕಾರ್ಯದರ್ಶಿ ಯಾಗಿ ಶಿರಂಗಾಲದ ಹೆಚ್.ಜೆ. ನಾಗರಾಜ್ (ಹಂಡ್ರಂಗಿ ನಾಗರಾಜ್), ಸಂಘಟನಾ ಕಾರ್ಯದರ್ಶಿಯಾಗಿ ಭಾಗಮಂಡಲದ ಟಿ. ಹೇಮಂತ್ ಕುಮಾರ್, ಖಜಾಂಚಿಯಾಗಿ ಮೂರ್ನಾಡಿನ ಪಿ.ಕೆ. ರವಿಶಂಕರ್, ಸಹ ಕಾರ್ಯದರ್ಶಿಗಳಾಗಿ ಎನ್. ಮಹದೇವ್, ಹೆಚ್.ಕೆ. ಉಮೇಶ್, ಸುನೀತ, ಹೆಚ್.ಆರ್. ಸರ್ವೋತ್ತಮ್, ನಾಗಪ್ಪ, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ಎನ್.ಎಸ್. ಚಿದಾನಂದ, ಎಸ್. ಜಯಶ್ರೀ, ಕ್ರೀಡಾ ಕಾರ್ಯದರ್ಶಿಗಳಾಗಿ ಎಸ್.ವಿ. ಮಲ್ಲೇಶ್, ಸಿ.ಎನ್. ಪಲ್ಲವಿ ಅವರನ್ನು ನಿಯೋಜಿಸಲಾಗಿದೆ.

ಸಂಘದ ನಿಕಟಪೂರ್ವ ಅಧ್ಯಕ್ಷ ಸಿ.ಎನ್. ವಿಶ್ವನಾಥ್ ಸಮ್ಮುಖದಲ್ಲಿ ಮಡಿಕೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದು ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು. ಇದೇ ಸಂದರ್ಭ ವಯೋ ನಿವೃತ್ತಿ ಹೊಂದಿದ ಸಂಘದ ಅಧ್ಯಕ್ಷ ಸಿ.ಎನ್. ವಿಶ್ವನಾಥ್ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.