ನಾಪೆÉÇೀಕು, ಮಾ. 2: ಐತಿಹಾಸಿಕ ಎಮ್ಮೆಮಾಡು ಉರೂಸ್‍ಗೆ ಜಮಅತ್ ಅಧ್ಯಕ್ಷ ಉಸ್ಮಾನ್ ಹಾಜಿ ದ್ವಜಾರೋಹಣ ದೊಂದಿಗೆ ಚಾಲನೆ ನೀಡಿದರು, ಇದಕ್ಕೂ ಮೊದಲು ಗಣ್ಯರು ದರ್ಗಾ ಶರೀಫ್‍ಗೆ ತೆರಳಿ ಸೂಫಿ ಸಯ್ಯದ್‍ರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಳಿಯಾವುಲ್ ಮುಸ್ತಫ ಸ್ಯ್ಯಿದ್ ಹಮಿದ್ ಕೋಯಮ್ಮ ತಂಙಳ್ ಮಾಟೂಲ್ ವಹಿಸಿದ್ದರು. ಈ ಸಂದರ್ಭ ಸಿ.ಎಂ. ಮಹಮ್ಮದ್ ಮುಸ್ಲಿಯಾರ್, ಸಯ್ಯಿದ್ ಹಾಮೀದ್ ಕೋಯಮ್ಮ ತಂಙಳ್ ಮಟೂಲ್, ಹಾಫಿಳ್ ಮಹಮ್ಮದ್ ಜುನೈದ್ ಸಖಾಫಿ, ಸಯ್ಯಿದ್ ಸಾಲಿಮ್ ಸಖಾಫಿ, ಸಯ್ಯಿದ್ ಕೋಯಮ್ಮ ತಂಙಳ್ ಆಹಮ್ಮದ್ ಹಾಜಿ ಕೆ.ಇ, ವಕ್ಪ್ ಬೋರ್ಡ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹೀಮಾನ್, ಕೆ.ಎಂ.ಹುಸೈನ್ ಸಖಾಫಿ, ಹಸೈನಾರ್ ಸಿ.ಎ. , ಕಾಳೇರ ಖಾದರ್ ಹಾಜಿ, ಸಾದಿಲಿ ಹಾಜಿ ಕಾಳೇರ, ಚಂಬಾರಂಡ ಸಾದಲಿ ಹಾಜಿ, ಸಿ.ಎಂ. ಮಾಹಿನೆ, ಸಿ.ಎಂ. ಹಂಸ, ಎ.ಎ. ಹಂಸ, ಚಂಬಾರಂಡ ಮಾಹಿನೆ ಮತ್ತಿತರರು ಇದ್ದರು.

ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.